Skip to content Skip to footer

ಬೆರ್ಮೆರ್

ತುಳುನಾಡ ಸೃಷ್ಟಿಕರ್ತನೆಂದೇ ನಂಬಲಾದ ತುಳುವರ ಆದಿಮೂಲದ ದೇವೆರಾಗಿರುವ ನಿರಾಕಾರ, ನಿರ್ಗುಣ, ಅನೂಹ್ಯ, ಅಗೋಚರ, ಅಗಾಧವಾದ ಹಾಗೂ ಸರ್ವಶಕ್ತವಾದ ಪ್ರಾಕೃತಿಕ ಶಕ್ತಿಯೇ ಬೆರ್ಮೆರ್ ಅಥವಾ ಬೆಮ್ಮೆರ್.
ಬೆರ್ಮರನ್ನು ತುಳುನಾಡಿನ ಪ್ರತಿ ಊರಿನಲ್ಲೂ ಬನಗಳಲ್ಲಿ, ಮಾಡಗಳಲ್ಲಿ, ಹೆಚ್ಚಿನ ದೇವಸ್ಥಾನಗಳಲ್ಲಿ (ಪ್ರಸ್ತುತ ಮಹಾಲಿಂಗೇಶ್ವರ, ಬ್ರಹ್ಮಲಿಂಗೇಶ್ವರ ಇತ್ಯಾದಿ ರೂಪದಲ್ಲಿ), ಕಂಬಳ ಗದ್ದೆಗಳಲ್ಲಿ, ಗರಡಿಗಳಲ್ಲಿ, ಆಲಡೆಗಳಲ್ಲಿ ನಾಗಬ್ರಹ್ಮ ಉರಿ ಬೆರ್ಮೆರ್ ಒರಿ ಬೆರ್ಮೆರ್ ಬೆಮ್ಮೆರ್, ಬೂತ ಬೆರ್ಮೆರ್ ಜಯವುಲ್ಲ ವಿವಿಧ ನಾಮಾಂಕಿತಗಳಲ್ಲಿ ಪರ್ವ ತಂಬಿಲ ನೇಮ ಬಲಿ ಉತ್ಸವದಂತಹ ಸೇವೆಗಳೊಂದಿಗೆ ಆರಾಧನೆ ನಡೆಯುತ್ತದೆ. ಅಂತಹ ತುಳುನಾಡ ಮೂಲಶಕ್ತಿಯಾದ ಬೆರ್ಮರ ಪ್ರಮುಖ ಆಲಯಗಳಲ್ಲಿ ಕುತ್ತಾರಿನ ಕ್ಷೇತ್ರವೂ ಒಂದು ಒಂದಾಗಿದೆ. ಇಲ್ಲಿ ಮೂಲತಃ ಬೆರ್ಮರಿಗೆ ಮಾಡ ಕಟ್ಟಿ ಅದರಲ್ಲಿ ಜೈನರ ಯಕ್ಷಬ್ರಹ್ಮನಿಗೆ ಹೋಲಿಸುವಂತಹ ಕುದುರೆಯೇರಿದ ಮಾನವ ರೂಪದಲ್ಲಿ ಆರಾಧನೆ ನಡೆಯುತ್ತಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ಕ್ರಿ.ಶಕ 1614-1626ರ ಆಸುಪಾಸಿನಲ್ಲಿ ಭಾರತಕ್ಕೆ ಆಗಮಿಸಿದ ಇಟಲಿ ಮೂಲದ Pietro Della Valle ಎಂಬವನು ಉಳ್ಳಾಲದ ಚೌಟರಸಿ ಅಬ್ಬಕ್ಕನ ಆಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಸೊಗಡನ್ನು ಕಾಣಲು ಹೊರಟಾಗ ಉಳ್ಳಾಲದ ಸಮೀಪದಲ್ಲೇ ರಾಣಿ ಅಬ್ಬಕ್ಕಳು ಕಟ್ಟಿಸಿದಂತಹ brimore ಎಂದು ಸಂಬೋಧಿಸಲಾದ ಬೆರ್ಮರ ಮಾಡದ ಒಳಗೆ ಹೋದಂತಹ ವಿಚಾರವನ್ನು ಅವನ ಕೃತಿಯಲ್ಲಿ ದಾಖಲಿಸಿರುತ್ತಾನೆ. ಈ ಕುರಿತಾಗಿ ಅವಲೋಕಿಸಿದಾಗ ಉಳ್ಳಾಲದ ಸಮೀಪ ಬೆರ್ಮರ ಮಾಡ ಅಥವಾ ಆಲಯ ಇದ್ದುದೇ ಆದರೆ ಅದು ಕುತ್ತಾರಿನಲ್ಲಿ ಹೊರತಾಗಿ ಬೇರೆಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ 16 ನೇ ಶತಮಾನದಲ್ಲಿ ಇಲ್ಲಿ ಬೆರ್ಮರ ಮಾಡ ಇತ್ತು ಈ ಮೂಲಕ ಸಾಬೀತು ಮಾಡಬಹುದು. ಆ ಪ್ರಕಾರ ಕುತ್ತಾರಿನ ಶ್ರೀಕ್ಷೇತ್ರದಲ್ಲಿ ಸಿರಿ ಕುಮಾರ ನಂದಿಗೋಣ ಲೆಕ್ಕೇಸಿರಿಯೊಡನೆ ಪ್ರಧಾನ ಸಾನಿಧ್ಯವಾಗಿ ಮಾಡದಲ್ಲಿ ಶ್ರೀ ಬೆರ್ಮರು ನೆಲೆಸಿರುತ್ತಾರೆ.
ಬೆರ್ಮೆರ್ ದೇವರು ಸಂತಾನ ಭಾಗ್ಯವನ್ನು ನೀಡುವ ಪಬ್ರಲ ಶಕ್ತಿಯಾದುದರಿಂದ ಸಂತಾನ ದೇರು ಬೆರ್ಮೆರ್ ದೇವರ ಬಳಿ ಪ್ರಾರ್ಥನೆ ಮಾಡುವುದು ಸೂಕ್ತವಾಗಿರುತ್ತದೆ. ಇದಕ್ಕೆ ನಿದರ್ಶನಗಳೂ ಕಂಡುಬರುತ್ತದೆ. ಹಲವಾರು

All Rights Reserved.