
ಶ್ರೀ ರಕ್ತಶ್ವರಿ (ಲೆಕ್ಕೇಸಿರಿ)
ಪ್ರಧಾನ ಸಾನಿಧ್ಯ: ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ದೈವ ತುಳುವರಲ್ಲಿ ಆದಿಮೂಲದ ದೈವವೆಂದೇ ಗುರುತಿಸಲಾದ ಭೂಮಿ ತೂಕಂದ ಕನ್ಯಾವು ಸತ್ಯ ಎಂಬ ಪುರಾಪು ಪಡೆದ ಕಾರಣೀಕ ಶಕ್ತಿಯೇ ಲೆಕ್ಕೇಸಿರಿ ಅಥವಾ ರಕೇಶ್ವರಿ ದೈವ. ಈ ಶಕ್ತಿಯ ಮೂಲದ ಕುರಿತಾಗಿ ತುಳುನಾಡಿನಲ್ಲಿ ಪ್ರಚಲಿತವಿರುವ ನಂಬಿಕೆ ಏನೆಂದರೆ ಎಲ್ಲಿ ಪ್ರಾಕೃತಿಕ ಸೊಗಡುಳ್ಳ ಜಲಸಂಪತ್ತಿನಿಂದ ಕಂಗೊಳಿಸುವ ಅಥವಾ ಬೆಳೆ ಕೃಷಿಗಳು ತುಂಬಿತುಳುಕುತ್ತಿದೆಯೋ ಅಲ್ಲಿ ಈ ದೈವವು ತಾನಾಗಿಯೇ ಉದಿಸಿ ಬರುವಳು ಎಂದು ನಂಬಲಾಗುತ್ತದೆ. ಒಂದೆಡೆಯಲ್ಲಿ ಶಕ್ತಿಯು ಆದಿಶಕ್ತಿಯ ಮಾತೃಸ್ವರೂಪಿ ದೇವಿ ಎಂಬ ನಂಬಿಕೆ ಇದ್ದರೂ ಇನ್ನೊಂದೆಡೆ ತುಳುನಾಡಿನ ಕಟ್ಟುಕಟ್ಟಳೆಯಲ್ಲಿ ಪ್ರಧಾನ ದೈವವಾಗಿ ಬಹುತೇಕ ಊರುಗಳಲ್ಲಿ ಆರಾಧನೆ ನಡೆಯುತ್ತದೆ. ಒಂದು ಹಿನ್ನೆಲೆ ಪ್ರಕಾರ ಮುಜೂರು ಪಡಂಗಡಿ ಬಾಳೊಲಿಗಳ ಕಾಲದಲ್ಲಿ ಬಾನು ಸೇನವ ಎಂಬವರ ಮುಖೇನ ವಿಜೃಂಭಣೆಯ ನೇಮ ನಡಾವಳಿ ಪಡೆದು ಅರಸು ದೈವವಾಗಿ ಮಾತ್ರವಲ್ಲದೆ ಹಲವಾರು ಕಡೆಗಳಲ್ಲಿ ಮೂಜಿಲ್ನಾಯ, ಬನ್ನಡ್ಕತ್ತಾಯ, ಅರಸು ಪಡ್ಡೆಟ್ಟುನಾರ್, ರಾವುದ ಕುಮಾರೆ ಇತ್ಯಾದಿ ನಾಮಾಂಕಿತದಿಂದಲೂ ಉತ್ಸವ ಪಡೆವ ದೈವವೂ ಲೆಕ್ಕೇಸಿರಿಯೇ ಆಗಿದೆ. ಹಾಗೂ ಅನೇಕ ಕಡೆಗಳಲ್ಲಿ ಒಂದು ಕೋಲಿನ ಮಾಡದಲ್ಲಿ ಕುದುರೆಯೇರಿರುವ ಕಡ್ನಲೆ ಅಡ್ಡನ (ಗುರಾಣಿ) ಹಿಡಿದ ಸಮರದೇವತೆಯಾಗಿಯೂ ರಕ್ತಶ್ವರಿಯ ಆರಾಧನೆ ನಡೆಯುತ್ತದೆ. ಅಂತಹ ಕಾರಣೀಕ ಶಕ್ತಿಯು ತಾನಾಗಿಯೇ ಉದ್ಭವಿಸಿದ ಪುಣ್ಯಸ್ಥಳವೇ ಶ್ರೀ ಕ್ಷೇತ್ರ ಕುತ್ತಾರು. ಮೂಲಶಕ್ತಿ ಎಂದೇ ಗೋಚರವಾದ ಈ ದೈವಕ್ಕೆ ಪೂರ್ವದಲ್ಲಿ ಮಾಡದಲ್ಲಿ ಸಮರದೇವತೆಯಂತೆ ವಿಶೇಷ ರೀತಿಯಲ್ಲಿ ಆರಾಧನೆ ನಡೆಯುತ್ತಿತ್ತೆಂದು ಕಂಡುಬಂದಿರುತ್ತದೆ.
ಕಾಲ ಚಕ್ರದ ತುಳಿತದಿಂದಾಗಿ ಕುತ್ತಾರಿನ ಮೂಲ ಮಣ್ಣಿನಲ್ಲಿ ತಾಯಿಯ ಆರಾಧನೆ ನಿಂತ ಕಾರಣ ತಾಯಿಯು ತಮ್ಮ ಭಂಡಾರದ ಮನೆಯಿಂದ ಉಳ್ಳಾಲದ ಪ್ರದೇಶಕ್ಕೆ ತೆರಳಿದರು.
ತಾಯಿಯು ಪ್ರಸ್ತುತ ಉಳ್ಳಾಲದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆರಾಧನೆ ಪಡೆಯುತ್ತಿದ್ದು ಕ್ರಮೇಣ ಉಳ್ಳಾಲ ಉಳಿಯ ಕ್ಷೇತ್ರದ ಉಳ್ಳಾಳಿ ಅಮ್ಮನವರ ಗದ್ದುಗೆಯಲ್ಲಿ ಒಟ್ಟಿಗೆ ಆರಾದಿಸಲ್ಪಡುತ್ತಿದ್ದರು. ಸಮಯದಲ್ಲಿ ಉಳಿಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀದೇವು ಮೂಲ್ಯಣ್ಣನವರ ಸ್ವಪ್ನದಲ್ಲಿ ಪ್ರತ್ಯಕ್ಷವಾಗಿ ತಾಯಿಯು ಕುತ್ತಾರಿನ ಮೂಲಮಣ್ಣಿಗೆ ತೆರಳಿ ಅಲ್ಲಿಯೇ ಧರ್ಮ ನಡಾವಳಿ ಉತ್ಸವವನ್ನು ಸ್ವೀಕರಿಸುತ್ತೇನೆಂದು ಸೂಚನೆ ನೀಡುತ್ತಾರೆ.
ಅದೇ ಪ್ರಕಾರ ತಾಯಿ ಆದಿಮಾಯೆ ರಕೇಶ್ವರಿ ಗ್ರಾಮಗಳಿಗೆ ಗ್ರಾಮದೇವತೆಯಾಗಿ, ಧರ್ಮಕ್ಕೆ ಧರ್ಮದೇವತೆಯಾಗಿ, ಮುಖ್ಯವಾಗಿ ಆರೋಗ್ಯಕ್ಕೆ ಧನ್ವಂತರಿಮಾತೆಯಾಗಿ ಹಾಗೂ ದೇವತಾರಾಧನೆ, ದೈವಾರಾಧನೆ, ನಾಗಾರಾಧನೆಯಲ್ಲಿ ಶಕ್ತಿಯಾಗಿ ಪ್ರಮುಖ ಆರಾಧನೆ ಪಡೆಯುತ್ತಿದ್ದಾರೆ.
ಬೆರ್ಮೆರ್ ತುಳುನಾಡ ಸೃಷ್ಟಿಕರ್ತನೆಂದೇ ನಂಬಲಾದ ತುಳುವರ ಆದಿಮೂಲದ ದೇವೆರಾಗಿರುವ ನಿರಾಕಾರ, ನಿರ್ಗುಣ, ಅನೂಹ್ಯ, ಅಗೋಚರ, ಅಗಾಧವಾದ ಹಾಗೂ ಸರ್ವಶಕ್ತವಾದ ಪ್ರಾಕೃತಿಕ ಶಕ್ತಿಯೇ ಬೆರ್ಮೆರ್ ಅಥವಾ ಬೆಮ್ಮೆರ್. ಬೆರ್ಮರನ್ನು ತುಳುನಾಡಿನ ಪ್ರತಿ ಊರಿನಲ್ಲೂ ಬನಗಳಲ್ಲಿ, ಮಾಡಗಳಲ್ಲಿ, ಹೆಚ್ಚಿನ ದೇವಸ್ಥಾನಗಳಲ್ಲಿ (ಪ್ರಸ್ತುತ ಮಹಾಲಿಂಗೇಶ್ವರ, ಬ್ರಹ್ಮಲಿಂಗೇಶ್ವರ ಇತ್ಯಾದಿ ರೂಪದಲ್ಲಿ), ಕಂಬಳ ಗದ್ದೆಗಳಲ್ಲಿ, ಗರಡಿಗಳಲ್ಲಿ, ಆಲಡೆಗಳಲ್ಲಿ ನಾಗಬ್ರಹ್ಮ ಉರಿ ಬೆರ್ಮೆರ್ ಒರಿ ಬೆರ್ಮೆರ್ ಬೆಮ್ಮೆರ್, ಬೂತ ಬೆರ್ಮೆರ್ ಜಯವುಲ್ಲ ವಿವಿಧ ನಾಮಾಂಕಿತಗಳಲ್ಲಿ ಪರ್ವ ತಂಬಿಲ ನೇಮ ಬಲಿ ಉತ್ಸವದಂತಹ ಸೇವೆಗಳೊಂದಿಗೆ ಆರಾಧನೆ ನಡೆಯುತ್ತದೆ.…
ಏಳ್ವೆರ್ ಸಿರಿಗಳು ಒರಿ ಕುಮಾರ ನಂದಿಗೋಣ ಬೆರ್ಮಮೂಲದಲ್ಲಿ ಹುಟ್ಟಿ ಬಂದು ಮಾನವ ರೂಪದಲ್ಲಿ ತನ್ನ ಕಲೆಕಾರ್ಣಿಕವನ್ನು ತೋರ್ಪಡಿಸಿ ಸತ್ಯ ಮಹಾತ್ಮರಾಗಿ ಮೆರೆದ ಶಕ್ತಿಗಳೇ ಸಿರಿಗಳು ಮತ್ತು ಕುಮಾರ. ಮಾಯಲೋಕದಲ್ಲಿ ಏಳೆರ್ ಅಕ್ಕ ತಂಗಿಯರಾಗಿ ಜನಿಸಿದ ಶಕ್ತಿಗಳು ಬೆರ್ಮರ ಅಪ್ಪಣೆಯಂತೆ ಭೂಲೋಕದಲ್ಲಿ ಮಾನವರೂಪದಲ್ಲಿ ಹುಟ್ಟುತ್ತಾರೆ. ಅಂತೆಯೇ ಮೊದಲಾಗಿ ಅಕ್ಕೆರಸು ಸಿರಿ, ದಾರು, ಸಾಮು, ಸೊನ್ನೆ, ಗಿಂಡೆ, ಅಬ್ಬಗ ಮತ್ತು ದಾರಗ ಎಂಬ ನಾಮದಲ್ಲಿ ಜನಿಸಿ, ಬೆರ್ಮರ ಸಾಕ್ಷಾತ್ ಅಂಶವಾದ ಕುಮಾರನು ಅಕ್ಕೆರಸು ಸಿರಿಯ ಮಗನಾಗಿ ಕುಮಾರ ಕೋಟಿ ಪೂಂಜ ಎಂಬ ನಾಮದಲ್ಲಿ ಸಿರಿಗಳೊಡನೆ ತಾನೂ ಮಾಯ ಸಂದು,ಕಾರಣೀಕ ಶಕ್ತಿಗಳಾಗಿ ಜಯವುಲ್ಲ…
ಕೊರಗಜ್ಜ ಮತ್ತು ಗುಳಿಗಜ್ಜ ದೈವಗಳು ತುಳುನಾಡಿನ ಅತ್ಯಂತ ಕಾರಣೀಕ ಶಕ್ತಿ ಭಕ್ತರಿಂದ ಪ್ರೀತಿ ಗೌರವದಿಂದ ಅಜ್ಜನೆಂದೇ ಕರೆಯಲ್ಪಡುವ ಕೊರಗತನಿಯ ದೈವವೇ ಇಲ್ಲಿನ ಅಧಿಪತಿಯಾಗಿ ನೆಲೆಸಿರುತ್ತಾರೆ. ಪಾರ್ದನದ ಪ್ರಕಾರ ಕೊರಗರ ಕೊಪ್ಪದಲ್ಲಿ ತನಿಯ ಎಂಬ ಹೆಸರಿನಲ್ಲಿ ಆಚು ಮೈರೆ ಪಣಂಬೂರ ಓಡಿ (ಒರವನ ಓಡಿಜನಿಸಿ) ದಂಪತಿಗೆ ಜನಿಸಿ, ಕಿರುವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಕೊನೆಗೆ ತಂದೆಯೂ ಕೊನೆಯುಸಿರೆಳೆದಾಗ, ಕೊರಗರ ಸಂತಾನ ಅಳಿಯುತ್ತ ಹೋದಾಗ ಕೊಪ್ಪವನ್ನು ತೊರೆದು, ಅನಾಥ ಸ್ಥಿತಿಯಲ್ಲಿ ಕುಳಿತಿದ್ದಾಗ ಎಣ್ಣುರ ಬರ್ಕೆಯ ಮೈರಕ್ಕೆ ಬೈದೆತಿಯನ್ನು ಕಂಡು ಅವನನ್ನು ವಿಚಾರಿಸಿ, ತಮ್ಮ ಮನೆಯಲ್ಲಿ ಆಶ್ರಯ ನೀಡಲು…