ಕನ್ನಡಕೆರೆ
ತುಳುನಾಡಿನ ಹೆಚ್ಚಿನ ಕಡೆಗಳಲ್ಲಿ ಹರಿವ ನೀರ ಪಕ್ಕದಲ್ಲಿ ಅಥವಾ ಕೊಳದ ಸಮೀಪದಲ್ಲೇ ಪ್ರಕೃತಿದತ್ತವಾದ ಜಾಗದಲ್ಲಿ ಲೆಕ್ಕೇಸಿರಿಯ ಆರಾಧನೆ ನಡೆಯುವಂತೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಕನ್ನಡಕೆರೆ ಎಂಬ ಬಹುಪುರಾತನ ಕೆರೆಯೂ ಸಮೀಪದಲ್ಲೇ (ಅಂದಾಜು 02 ಫರ್ಲಾಂಗು ದೂರದಲ್ಲಿ ) ಕಾಣಸಿಗುತ್ತದೆ. ಈ ಕೆರೆಯ ಒಳಗಡೆಯೇ ಎಳು ಸಣ್ಣ ಕೆರೆಗಳಿವೆ ಎಂದು ಹೇಳಲಾಗುತ್ತದೆ. ಈ ಕೆರೆಯು ನಮ್ಮ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದು ಹಲವಾರು ವಿಶಿಷ್ಟ ಸಂಗತಿಗಳನ್ನು ಒಳಗೊಂಡಿದೆ. ಈ ಕೆರೆಯಲ್ಲಿ ಹಿಂದೆ ಕಡಲಿನಂತೆ ಸೆರೆಗಳು ಎದ್ದು ಕೆರೆಯ ದಂಡೆಗೆ ಅಪ್ಪಳಿಸುತ್ತಿತ್ತಂತೆ. ಅಲ್ಲದೆ ಹಿಂದೆ ಕೆಮ್ಮುರೋಗ ಇದ್ದವರಿಗೆ ಈ ಕೆರೆಯಲ್ಲಿ ಸಿಗುತ್ತಿದ್ದ ವಿಶೇಷ ಚಿಪ್ಪುಗಳಿಂದ (ಪಚ್ಚಿಲೆ) ಮದ್ದು ತಯಾರಿಸಿದರೇ ರೋಗ ಗುಣವಾಗುತ್ತದೆ ಎಂದು ಹಿರಿಯರು ತಿಳಿಸಿರುತ್ತಾರೆ.ಒಟ್ಟಿನಲ್ಲಿ ಬಹು ವಿಶಿಷ್ಟವಾದ ಈ ಕೆರೆಯು ಇಂದು ಜೀರ್ಣಾವಸ್ಥೆಯಲ್ಲಿ ಪುನಃ ತನ್ನ ಪೂರ್ವದ ಸೊಬಗನ್ನು ಕಾಣಲು ಕಾತರಿಸುತ್ತಿದೆ.

ಶ್ರೀಕ್ಷೇತ್ರದ ಪುನರ್ ನಿರ್ಮಾಣ
ಅನಾದಿಯಲ್ಲಿ ಬಹುವೈಭವದಿಂದ ಆರಾಧನೆ ಪಡೆಯುತ್ತಿದ್ದ ಬೆರ್ಮೆರ್, ರಕ್ತಶ್ವರಿ ಮತ್ತು ಸಿರಿಗಳ ಸಾನಿಧ್ಯವು ಕಾಲಾನಂತರ ನಾಶವಾಗಿ ಜನಮಾನಸದಿಂದ ಕಣ್ಮರೆಯಾಗಿ ಹೋಯಿತು. ಈ ಸಿರಿಗಳ ದುಖಃವನ್ನು ಕಾಣಲಾಗದೆ ಕೊರಗಜ್ಜ ದೈವವೇ ಶ್ರೀಕ್ಷೇತ್ರದ ಪುನರ್ ನಿರ್ಮಾಣಕ್ಕೆ ಅಣಿಯಾಗಿ ಜೀರ್ಣೋದ್ಧಾರಕ್ಕಾಗಿ ಮುಂದಾಳತ್ವ ವಹಿಸುವುದಾಗಿ ಈಗಾಗಲೇ ಪ್ರಶ್ನಾಚಿಂತನೆಯಲ್ಲೂ ಕಂಡುಬಂದಿರುತ್ತದೆ. ಆ ಪ್ರಕಾರ ಊರಿನ ಭಕ್ತರೆಲ್ಲರೂ ಸೇರಿಕೊಂಡು ಕೊರಗಜ್ಜನ ಪ್ರೇರಣೆಯಂತೆ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಪಣತೊಡುತ್ತಾರೆ. ಅಂತೆಯೇ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಎಲ್ಲಾ ಶಕ್ತಿಗಳಿಗೆ ಅಂದರೆ :
ರಕ್ತಶ್ವರಿಗೆ ಮಾಡ
ಬೆರ್ಮರಿಗೆ ಮಾಡ
ಏಳೂರು ಸಿರಿಗಳಿಗೆ ಧರ್ಮಚಾವಡಿ
ಕುಮಾರನಿಗೆ ಅಶ್ವತ್ಥ ಮರದಡಿಯಲ್ಲಿ ಕಟ್ಟೆ
ನಂದಿಗೋಣನಿಗೆ ಮಾಡ
ಕೊರಗಜ್ಜ – ಗುಳಿಗಜ್ಜನಿಗೆ ಕಟ್ಟೆ
ನಾಗದೇವರಿಗೆ ಕಟ್ಟೆ
ಈ ರೀತಿ ಎಲ್ಲಾ ಶಕ್ತಿಗಳಿಗೆ ಸಾನಿಧ್ಯ ಕಲ್ಪಿಸಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಿ, ನಿತ್ಯ ಆರಾಧನೆ ಮಾಡುವುದೆಂದು ನಿರ್ಧರಿಸಲಾಗಿದೆ.
ಆ ನಿಟ್ಟಿನಲ್ಲಿ ಪೂರ್ವಾಭಾವಿಯಾಗಿ ಎಲ್ಲಾ ಶಕ್ತಿಗಳಿಗೆ ನೂತನವಾಗಿ ಆಲಯ ನಿರ್ಮಾಣಕ್ಕೆ ಯೋಗ್ಯಸ್ಥಳವನ್ನು ಗುರುತಿಸಿ ಎಲ್ಲಾ ಶಕ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿರುತ್ತದೆ. ವಿಶೇಷವೆಂಬಂತೆ ಬಾಲಾಲಯ ಪ್ರತಿಷ್ಠಾ ದಿನದಿಂದ ಇಂದಿನವರೆಗೂ ಪ್ರತಿನಿತ್ಯ ನೂರಾರು ಭಕ್ತಾದಿಗಳು ದೂರದ ಊರುಗಳಿಂದಲೂ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೈವಗಳಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿರುತ್ತಾರೆ.
ಪುನರ್ ನಿರ್ಮಾಣದ ಮುಂಚಿತವಾಗಿ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಹಿರಿಯರು ಶ್ರೀಕ್ಷೇತ್ರಕ್ಕೆ ಶಿಲಾನ್ಯಾಸ ಮಾಡಲಾಯಿತು. ಅಂದಿನಿಂದ ಹಂತ ಹಂತವಾಗಿ ಎಲ್ಲಾ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪ್ರಾರಂಭದಿಂದಲೂ ಜೀರ್ಣೋದ್ಧಾರ ಹಲವಾರು ಕಾರ್ಯದ ಸಂಕಷ್ಟಗಳು ಆಕ್ಷೇಪಗಳು ಬಂದರೂ ಅದೆಲ್ಲವೂ ದೈವಚಿತ್ತವೆಂಬಂತೆ ತಾನಾಗಿಯೇ ಸರಿಯಾಗಿ ನಿರ್ವಿಘ್ನವಾಗಿ ಎಲ್ಲಾ ಕಾರ್ಯಗಳು ಸಾಗುತ್ತಿವೆ.
ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ಪ್ರಧಾನ ಸಾನಿಧ್ಯ: ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ದೈವ ತುಳುವರಲ್ಲಿ ಆದಿಮೂಲದ ದೈವವೆಂದೇ ಗುರುತಿಸಲಾದ ಭೂಮಿ ತೂಕಂದ ಕನ್ಯಾವು ಸತ್ಯ ಎಂಬ ಪುರಾಪು ಪಡೆದ ಕಾರಣೀಕ ಶಕ್ತಿಯೇ ಲೆಕ್ಕೇಸಿರಿ ಅಥವಾ ರಕೇಶ್ವರಿ ದೈವ. ಈ ಶಕ್ತಿಯ ಮೂಲದ ಕುರಿತಾಗಿ ತುಳುನಾಡಿನಲ್ಲಿ ಪ್ರಚಲಿತವಿರುವ ನಂಬಿಕೆ ಏನೆಂದರೆ ಎಲ್ಲಿ ಪ್ರಾಕೃತಿಕ ಸೊಗಡುಳ್ಳ ಜಲಸಂಪತ್ತಿನಿಂದ ಕಂಗೊಳಿಸುವ ಅಥವಾ ಬೆಳೆ ಕೃಷಿಗಳು ತುಂಬಿತುಳುಕುತ್ತಿದೆಯೋ ಅಲ್ಲಿ ಈ ದೈವವು ತಾನಾಗಿಯೇ ಉದಿಸಿ ಬರುವಳು ಎಂದು ನಂಬಲಾಗುತ್ತದೆ. ಒಂದೆಡೆಯಲ್ಲಿ ಶಕ್ತಿಯು ಆದಿಶಕ್ತಿಯ ಮಾತೃಸ್ವರೂಪಿ…
ಬೆರ್ಮೆರ್ ತುಳುನಾಡ ಸೃಷ್ಟಿಕರ್ತನೆಂದೇ ನಂಬಲಾದ ತುಳುವರ ಆದಿಮೂಲದ ದೇವೆರಾಗಿರುವ ನಿರಾಕಾರ, ನಿರ್ಗುಣ, ಅನೂಹ್ಯ, ಅಗೋಚರ, ಅಗಾಧವಾದ ಹಾಗೂ ಸರ್ವಶಕ್ತವಾದ ಪ್ರಾಕೃತಿಕ ಶಕ್ತಿಯೇ ಬೆರ್ಮೆರ್ ಅಥವಾ ಬೆಮ್ಮೆರ್. ಬೆರ್ಮರನ್ನು ತುಳುನಾಡಿನ ಪ್ರತಿ ಊರಿನಲ್ಲೂ ಬನಗಳಲ್ಲಿ, ಮಾಡಗಳಲ್ಲಿ, ಹೆಚ್ಚಿನ ದೇವಸ್ಥಾನಗಳಲ್ಲಿ (ಪ್ರಸ್ತುತ ಮಹಾಲಿಂಗೇಶ್ವರ, ಬ್ರಹ್ಮಲಿಂಗೇಶ್ವರ ಇತ್ಯಾದಿ ರೂಪದಲ್ಲಿ), ಕಂಬಳ ಗದ್ದೆಗಳಲ್ಲಿ, ಗರಡಿಗಳಲ್ಲಿ, ಆಲಡೆಗಳಲ್ಲಿ ನಾಗಬ್ರಹ್ಮ ಉರಿ ಬೆರ್ಮೆರ್ ಒರಿ ಬೆರ್ಮೆರ್ ಬೆಮ್ಮೆರ್, ಬೂತ ಬೆರ್ಮೆರ್ ಜಯವುಲ್ಲ ವಿವಿಧ ನಾಮಾಂಕಿತಗಳಲ್ಲಿ ಪರ್ವ ತಂಬಿಲ ನೇಮ ಬಲಿ ಉತ್ಸವದಂತಹ ಸೇವೆಗಳೊಂದಿಗೆ ಆರಾಧನೆ ನಡೆಯುತ್ತದೆ.…
ಏಳ್ವೆರ್ ಸಿರಿಗಳು ಒರಿ ಕುಮಾರ ನಂದಿಗೋಣ ಬೆರ್ಮಮೂಲದಲ್ಲಿ ಹುಟ್ಟಿ ಬಂದು ಮಾನವ ರೂಪದಲ್ಲಿ ತನ್ನ ಕಲೆಕಾರ್ಣಿಕವನ್ನು ತೋರ್ಪಡಿಸಿ ಸತ್ಯ ಮಹಾತ್ಮರಾಗಿ ಮೆರೆದ ಶಕ್ತಿಗಳೇ ಸಿರಿಗಳು ಮತ್ತು ಕುಮಾರ. ಮಾಯಲೋಕದಲ್ಲಿ ಏಳೆರ್ ಅಕ್ಕ ತಂಗಿಯರಾಗಿ ಜನಿಸಿದ ಶಕ್ತಿಗಳು ಬೆರ್ಮರ ಅಪ್ಪಣೆಯಂತೆ ಭೂಲೋಕದಲ್ಲಿ ಮಾನವರೂಪದಲ್ಲಿ ಹುಟ್ಟುತ್ತಾರೆ. ಅಂತೆಯೇ ಮೊದಲಾಗಿ ಅಕ್ಕೆರಸು ಸಿರಿ, ದಾರು, ಸಾಮು, ಸೊನ್ನೆ, ಗಿಂಡೆ, ಅಬ್ಬಗ ಮತ್ತು ದಾರಗ ಎಂಬ ನಾಮದಲ್ಲಿ ಜನಿಸಿ, ಬೆರ್ಮರ ಸಾಕ್ಷಾತ್ ಅಂಶವಾದ ಕುಮಾರನು ಅಕ್ಕೆರಸು ಸಿರಿಯ ಮಗನಾಗಿ ಕುಮಾರ ಕೋಟಿ ಪೂಂಜ ಎಂಬ ನಾಮದಲ್ಲಿ ಸಿರಿಗಳೊಡನೆ ತಾನೂ ಮಾಯ ಸಂದು,ಕಾರಣೀಕ ಶಕ್ತಿಗಳಾಗಿ ಜಯವುಲ್ಲ…
ಕೊರಗಜ್ಜ ಮತ್ತು ಗುಳಿಗಜ್ಜ ದೈವಗಳು ತುಳುನಾಡಿನ ಅತ್ಯಂತ ಕಾರಣೀಕ ಶಕ್ತಿ ಭಕ್ತರಿಂದ ಪ್ರೀತಿ ಗೌರವದಿಂದ ಅಜ್ಜನೆಂದೇ ಕರೆಯಲ್ಪಡುವ ಕೊರಗತನಿಯ ದೈವವೇ ಇಲ್ಲಿನ ಅಧಿಪತಿಯಾಗಿ ನೆಲೆಸಿರುತ್ತಾರೆ. ಪಾರ್ದನದ ಪ್ರಕಾರ ಕೊರಗರ ಕೊಪ್ಪದಲ್ಲಿ ತನಿಯ ಎಂಬ ಹೆಸರಿನಲ್ಲಿ ಆಚು ಮೈರೆ ಪಣಂಬೂರ ಓಡಿ (ಒರವನ ಓಡಿಜನಿಸಿ) ದಂಪತಿಗೆ ಜನಿಸಿ, ಕಿರುವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಕೊನೆಗೆ ತಂದೆಯೂ ಕೊನೆಯುಸಿರೆಳೆದಾಗ, ಕೊರಗರ ಸಂತಾನ ಅಳಿಯುತ್ತ ಹೋದಾಗ ಕೊಪ್ಪವನ್ನು ತೊರೆದು, ಅನಾಥ ಸ್ಥಿತಿಯಲ್ಲಿ ಕುಳಿತಿದ್ದಾಗ ಎಣ್ಣುರ ಬರ್ಕೆಯ ಮೈರಕ್ಕೆ ಬೈದೆತಿಯನ್ನು ಕಂಡು ಅವನನ್ನು ವಿಚಾರಿಸಿ, ತಮ್ಮ ಮನೆಯಲ್ಲಿ ಆಶ್ರಯ ನೀಡಲು…